878
- ಹೊಸಕೋಟೆ : ಎನ್ಟಿಎ ನಡೆಸುವ ರಾಷ್ಟçಮಟ್ಟದ ಇಂಜಿನಿಯರಿAಗ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್ಸ್-೧ ಫಲಿತಾಂಶದಲ್ಲಿ ಹೊಸಕೋಟೆ ತಾಲೂಕು ಬೇಗೂರು ಗ್ರಾಮದ ವಿದ್ಯಾರ್ಥಿ ನಿಶ್ಚಲ್ ಪಿ.ಗೌಡ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಬೇಗೂರು ಗ್ರಾಮದ ಬಿ.ಎನ್ ಪ್ರಫುಲ್ ಚಂದ್ರ,ಚೈತ್ರಾ ದಂಪತಿಯ ಮಗ ನಿಶ್ಚಲ್ ಪಿ ಗೌಡ (ಜಿಪಂ ಮಾಜಿ ಸದಸ್ಯ ಬಿ.ಎಂ ನಾರಾಯಣಸ್ವಾಮಿ ಅವರ ಮೊಮ್ಮಗ) ಮೂಡುಬಿದಿರೆ ಕಲ್ಲುಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದು, ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಈ ಕಾಲೇಜಿನಲ್ಲಿ ಜೆಇಇ ಪರೀಕ್ಷೆ ಎದುರಿಸಿದ್ದ ೩೦೬ ವಿದ್ಯಾರ್ಥಿಗಳ ಪೈಕಿ ಶೇ.೯೮ ಫಲಿತಾಂಶ ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ. ಗ್ರಾಮೀಣ ಭಾಗದ ಈ ವಿದ್ಯಾರ್ಥಿ ಸಾಧನೆಗೆ ಹಲವರು ಅಭಿನಂದಿಸಿದ್ದಾರೆ.

