111
ಬೆಂಗಳೂರು ಗ್ರಾಮಾಂತರ : ತಮಿಳುನಾಡು ರಾಜ್ಯದ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ತಮಿಳುನಾಡು ಹೊಸಕೋಟೆ ಗಡಿ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಆದೇಶ ಹೊರಡಿಸಿದ್ದಾರೆ.
ಚುನಾವಣೆ ನ್ಯಾಯ ಸಮ್ಮತವಾಗಿ ಶಾಂತಿಯುತವಾಗಿ ಮತ್ತು ಮುಕ್ತವಾಗಿ ನಡೆಯುವಂತಾಗಲು ತಮಿಳುನಾಡು ರಾಜ್ಯದ ಗಡಿಗೆ ಹೊಂದಿಕೊ0ಡಿರುವ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಡಿಭಾಗದ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಏಪ್ರಿಲ್ ೨೩ ರಂದು ನಡೆಯುವ ಮತದಾನದ ಪ್ರಯುಕ್ತ
ಏ.೨೧ ರಂದು ಸಂಜೆ ೫ ಗಂಟೆಯಿ0ದ ಏ. ೨೩ ಮಧ್ಯರಾತ್ರಿ ೧೨ ಗಂಟೆವರೆಗೆ ಹಾಗೂ ಮೇ. ೦೪ ರಂದು ಮತ ಎಣಿಕೆ ಪ್ರಯುಕ್ತ ಮೇ. ೦೩ ಮಧ್ಯರಾತ್ರಿ ೧೨ ಗಂಟೆಯಿ0ದ ಮೇ. ೦೪ ಮಧ್ಯರಾತ್ರಿ ೧೨ ಗಂಟೆಯವರೆಗೆ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ದಾಸ್ತಾನು ಮುಂತಾದವುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಆದೇಶಿಸಿದ್ದಾರೆ.

