136
ಹೊಸಕೋಟೆ : ಹೊಸಕೋಟೆ ತಾಲೂಕು ಯಾದವ ಯುವ ವೇದಿಕೆ ಅಧ್ಯಕ್ಷರಾಗಿ ಇ .ಮುತ್ಸಂದ್ರ ಗ್ರಾಮದ ಸಂತೋಷ್ ಕುಮಾರ್ ಎ. ಆಯ್ಕೆ
ಹೊಸಕೋಟೆ : ಕರ್ನಾಟಕ ಯಾದವ ಯುವ ವೇದಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಯಾದವ ಯುವ ವೇದಿಕೆ ಹೊಸಕೋಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಎ. ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಸುನಿಲ್ ಯಾದವ್ ಕೆ.ಸಿ. ಅವರು ಆದೇಶ ಪ್ರತಿಯನ್ನು ನೀಡಿ ಗೌರವಿಸಿದರು.
ಸಭೆಯಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಯಾದವ್, ಸಹ ಸಂಸ್ಥಾಪಕರಾದ ಶ್ರೀನಿವಾಸ್ ಪಿ.ಕೆ.ಎಸ್., ರಾಜ್ಯ ಕಾರ್ಯಾಧ್ಯಕ್ಷರಾದ ಅನಿಲ್ ಯಾದವ್, ರಾಜ್ಯ ಉಪಾಧ್ಯಕ್ಷರಾದ ನಾಗೇಶ್ ಯಾದವ್, ರಾಜ್ಯ ಕಾರ್ಯದರ್ಶಿ ಬಾಬು ಯಾದವ್ ಹಾಗೂ ರಾಜ್ಯ ನಿರ್ದೇಶಕರಾದ ನಲ್ಲಾಳ ವೆಂಕಟೇಶ್,ನಲ್ಲಾಳ್ ನಾಗೇಶ್,ಕರಪ್ಪನಹಳ್ಳಿ ವೆಂಕಟೇಶ್,ಗ್ರಪ0 ಮಾಜಿ ಸದಸ್ಯ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

