ಬೆಂಗಳೂರು ಗ್ರಾಮಾಂತರ : ಕೇರಳ ಮಹಿಳೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣನಾಗಿದ್ದ ದೀಪಕ್ ಕೃಷ್ಣ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೂಲಿಬೆಲೆಯ ತನ್ನ ಮನೆಯಲ್ಲಿ ಸಾಕು ನಾಯಿಗಳ
ಆರೈಕೆ ಕೆಲಸಕ್ಕಾಗಿ ನೇಮಿಸಿಕೊಂಡಿದ್ದ ಕೇರಳದ ಸುನೀತಾ ಸ್ಮೀತಾ ಅವರೊಂದಿಗೆ ಲೈಗಿಂಕ ದೌರ್ಜನ್ಯ ಎಸೆಗಿದ್ದ. ಇದನ್ನು ವಿರೋಧಿಸಿದ ಆಕೆಯ ಮೇಲೆ ಮೇ.೩ ರಂದು ಮಾರಾಣಾಂತಿಕ ಹಲ್ಲೆ ನಡೆಸಿದ್ದ. ಗಂಬೀರವಾಗಿ ಗಾಯಾಗೊಂಡ ಆಕೆಯನ್ನು ಕೇರಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೇ.೫ ರಂದು ಸಾವನ್ನಪ್ಪಿದ್ದಳು. ಈ ಪ್ರಕರಣ ಕೇರಳದ ತ್ರಿಶೂರು ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆನೇಕರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಲಾಗಿತ್ತು. ಪ್ರಕರಣದ ತನಿಖೆಗಾಗಿ ಸೂಲಿಬೆಲೆ ಪೊಲೀಸರು ಕೇರಳಕ್ಕೆ ತೆರೆಳಿದ್ದರು. ಈ ನಡುವೆ ಹಲ್ಲೆ ನಡೆಸಿ ಪರಾರಿಯಾಗಿದ್ದ ದೀಪಕ್ ಕೃಷ್ಣನನ್ನು ಸೂಲಿಬೆಲೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

