209
ವಿಜಯ ನ್ಯೂಸ್, ದಾವಣಗೆರೆ ಮೇ ೧೮
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ ಸಾವನ್ನಪ್ಪಿದ್ದಾನೆ. ಸಿಡಿಲಿನ ಅಬ್ಬರಕ್ಕೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಭಾನುವಾರ ರಜೆಯಿದ್ದ ಕಾರಣ ಗ್ರಾಮದಲ್ಲಿದ್ದರು. ಮನೆ ಮುಂಭಾಗದಲ್ಲಿ ನಿಂತಿದ್ದಾಗ ಮಳೆ ಶುರುವಾಗಿದ್ದು, ಒಮ್ಮೆಲೇ ಸಿಡಿಲಿನ ಅಬ್ಬರ ಶುರುವಾಗಿದೆ. ಸಿಡಿಲಿನ ಅಬ್ಬರಕ್ಕೆ ನಿಂತಲೇ ಶಿಕ್ಷಕ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಮೃತಪಟ್ಟಿರುವ ವಿಷಯವನ್ನು ಖಚಿತ ಪಡಿಸಿದ್ದಾರೆ. ಶಿಕ್ಷಕರ ಸಾವಿಗೆ ಸಿಡಿಲಿನ ಅಘಾತವೋ, ಆ ಶಬ್ದದಿಂದ ಉಂಟಾದ ಹೃದಯಘಾತವೋ ಖಚಿತವಾಗಬೇಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

