24
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿವಿಯ ಹಾಸ್ಟೆಲ್ ಕಟ್ಟಡ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ನಯನ(20) ಮೃತ ವಿದ್ಯಾರ್ಥಿನಿ.ಬೆಂಗಳೂರು ಸರ್ಜಾಪುರ ಮೂಲದ ವಿದ್ಯಾರ್ಥಿ ಹಾಸ್ಟೆಲ್ ನ 12 ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ಈ ರೀತಿಯ ಘಟನೆಗಳ ಇಲ್ಲಿ ಪದೇ ಪದೇ ಅಗುತ್ತಿರುವ ಬಗೆ ನಾನಾ ಆರೋಪಗಳು ವ್ಯಕ್ತವಾಗುತ್ತಿವೆ.ಈ ಬಗೆ ಸಮಗ್ರ ತನಿಖೆಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

