Home Uncategorizedಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಮಕ್ಕಳು ಸಾವು

ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಮಕ್ಕಳು ಸಾವು

ದೊಡ್ಡಬಳ್ಳಾಪುರ ತೊಗರಿ ಘಟ್ಟದಲ್ಲಿ ಘಟನೆ

by Editor

ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ದೊಡ್ಡಬಳ್ಳಾಪುರದ ತೊಗರಿ ಘಟ್ಟದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಸವಿತಾ ಮತ್ತು ಮುನಿರಾಜು ದಂಪತಿಯ ಮಗಳಾದ ೧೧ ವರ್ಷದ ದಕ್ಷಾ, ಆಶಾ ಮತ್ತು ಪ್ರದೀಪ್ ದಂಪತಿಯ ಮಗನಾದ ೪ ವರ್ಷದ ಧನುಷ್ ಮೃತರು.
ತೊಗರಿಘಟ್ಟದಲ್ಲಿರುವ ಗುರುಮೂರ್ತಿ ಎಂಬುವರಿಗೆ ಸೇರಿದ ಕೃಷಿ ಹೊಂಡದ ಸುತ್ತಲು ಬೇಲಿ ಹಾಕಿರಲಿಲ್ಲ.ಮಕ್ಕಳು ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕೃಷಿ ಹೊಂಡಕ್ಕೆ ಸರಿಯಾದ ಭದ್ರತೆ ಮಾಡದ ಗುರುಮೂರ್ತಿ ವಿರುದ್ದ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

You may also like

Leave a Comment

ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ,ನಾಲ್ವರು ಸಾವು   ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಮಕ್ಕಳು ಸಾವು   ೩೦ ಜನರಿಗೆ ಉಚಿತ ಕನ್ನಡಕಗಳ ವಿತರಣೆ   ಗುಣಾತ್ಮಕ ಶಿಕ್ಷಣಕ್ಕೆ ಮೊದಲ ಆಯ್ಕೆ ಸರಕಾರಿ ಶಾಲೆಯಾಗಿರಲಿ   ಬೆಂಗಳೂರು ಗ್ರಾಮಾಂತರ ಜಿಪಂನಲ್ಲಿ ಪ್ರಗತಿ ಪರಿಶೀಲನೆ ಸಭೆ